ಗಾಂಜಾ ವಶ ಮೂವರ ಬಂಧನ

ಅರಕಲಗೂಡು:   ವಾಹನ ತಪಾಸಣೆ ವೇಳೆ  ಗಾಂಜಾ ಪೊಟ್ಟಣ ಪತ್ತೆಯಾದ ಹಿನ್ನೆಲೆಯಲ್ಲಿ ಇಲ್ಲಿನ  ಪೊಲೀಸರು ಮೂವರು ಯುವಕರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. 

ಸಿಪಿಐ ಸತ್ಯನಾರಾಯಣ ಹಾಗೂ ಪಿಎಸ್ಐ ಮಾಲಾ  ಸಿಬ್ಬಂದಿಯೊಂದಿಗೆ  ಶನಿವಾರ ರಾತ್ರಿ ವಾಹನಗಳ ತಪಾಸಣೆ ನಡೆಸುತ್ತಿದ್ದ ವೇಳೆ ಬೆಂಗಳೂರಿನಿಂದ ಮಡಿಕೇರಿಗೆ ತೆರಳುತ್ತಿದ್ದ ಕಾರಿನಲ್ಲಿ ಗಾಂಜಾ ಪೊಟ್ಟಣ ಪತ್ತೆಯಾಯಿತು.  ಕಾರಿನಲ್ಲಿದ್ದ ಬೆಂಗಳೂರು ಮಾದನಾಯಕನಹಳ್ಳಿಯ ಕಿರಣ್, ಭಾರ್ಗವ ಮತ್ತು ವೆಂಕಟೇಶ್ ಅವರನ್ನು ವಶಕ್ಕೆ ಪಡೆದಿರುವ ಪೊಲೀಸರು  ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸಂಪಾದಕ - ರವಿ

Post a Comment

0 Comments