ಡಿ.೩೧ರಂದು ರಾಜ್ಯ ಮಟ್ಟದ ಶತ ಕವಿಗಳ‌ ಚುಟುಕು ಕವಿಗೋಷ್ಠಿ

ಅರಕಲಗೂಡು:   ಚುಟುಕು ಸಾಹಿತ್ಯ ಪರಿಷತ್  ತಾಲ್ಲೂಕು ಘಟಕವು ರಾಜ್ಯ ಮಟ್ಟದ ಶತ ಕವಿಗಳ ಚುಟುಕು  ಕವಿಗೋಷ್ಠಿ, ನೂತನ ಪದಾಧಿಕಾರಿಗಳ ಪದ ಗ್ರಹಣ ಹಾಗೂ ಕೃತಿ ಲೋಕಾರ್ಪಣೆ ಕಾರ್ಯವನ್ನು ಡಿ31 ರಂದು  ಏರ್ಪಡಿಸಲಾಗಿದೆ  ಎಂದು ಅಧ್ಯಕ್ಷ  ಸುಂದರೇಶ್ ಡಿ ಉಡುವಾರೆ ತಿಳಿಸಿದರು. 

ಪಟ್ಟಣದ ಶಿಕ್ಷಕರ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ  ರಾಜ್ಯದ ವಿವಿಧ ಜಿಲ್ಲೆಗಳ ನೂರಕ್ಕೂ ಹೆಚ್ಚಿನ ಚುಟುಕು ಕವಿಗಳು ಭಾಗವಹಿಸಲಿದ್ದಾರೆ.  ಸ್ಥಳೀಯ ಪ್ರತಿಬೆಗಳನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ತಾಲ್ಲೂಕಿನವರಿಗೆ ಹೆಚ್ಚಿನ ಅವಕಾಶ ಕಲ್ಪಿಸಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.  ಕಾರ್ಯಕ್ರಮದಲ್ಲಿ  ದೊಡ್ಡಮಠದ ಮಠಾಧೀಶ  ಮಲ್ಲಿಕಾರ್ಜುನ ಸ್ವಾಮೀಜಿ, ಶಾಸಕ  ಎ.ಟಿ.ರಾಮಸ್ವಾಮಿ, ಮಾಜಿ ಸಚಿವ ಎ.ಮಂಜು, ಜಿಲ್ಲಾ ಚುಸಾಪ  ಅಧ್ಯಕ್ಷ  ಲೋಕೇಶ್, ತಹಶೀಲ್ದಾರ್ ಕೆ.ಆರ್.ಶ್ರೀನಿವಾಸ್ ಪಾಲ್ಗೊಳ್ಳುವರು. ಕವಿಯಿತ್ರಿ ಗೊರೂರು ಪಂಕಜ ಕವಿಗೋಷ್ಠಿಯ  ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು. 

ಪರಿಷತ್ತಿನ ಪ್ರಮುಖರಾದ ವರುಣ್,ಮಂಜು, ಶೇಖರ್, ಗಂಗಾಧರ್ ಗೋಷ್ಠಿಯಲ್ಲಿದ್ದರು.

Post a Comment

0 Comments