ಈ ಶಿಬಿರದಲ್ಲಿ ಹಲವರು ಸ್ವಯಂ ಪ್ರೇರಿತವಾಗಿ ಆಗಮಿಸಿ ರಕ್ತದಾನ ಮಾಡಿದರು. ಇದಕ್ಕೂ ಮುನ್ನ ಬಿಜೆಪಿ ಮುಖಂಡ ಎಚ್. ಯೋಗಾರಮೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,
ನರೇಂದ್ರಮೋದಿ ಅವರು ಪ್ರಧಾನಿಯಾದ ಬಳಿಕ ಹಲವು ಜನಪರ ಕೆಲಸಗಳನ್ನು ಮಾಡಿದ್ದಾರೆ. ಜತೆಗೆ ದೇಶದ ಹೆಸರನ್ನು ವಿಶ್ವದಮಟ್ಟಕ್ಕೆ ಕೊಂಡೋಯ್ದಿದ್ದಾರೆ. ಕಾಶ್ಮೀರದಿಂದ ಕನ್ಯಾಕುಮಾರಿಗೆ ದೇಶದ ಸಮಗ್ರ ಅಭಿವೃದ್ಧಿ ಮಾಡಿದ್ದಾರೆ. ಇವರೊಬ್ಬ ಕ್ರಾಂತಿವೀರ ಪುರುಷ ಎಂದು ಬಣ್ಣಿಸಿದರು.
ಕಳಂಕ ರಹಿತ, ಸ್ವಚ್ಛ, ದಕ್ಷ ಆಡಳಿತ ನೀಡುವ ಪ್ರಧಾನಿ ಇರುವುದು ನಮ್ಮೆಲ್ಲರ ಹೆಮ್ಮೆ ಎಂದರು.
ಬಿಜೆಪಿ ಅರಕಲಗೂಡು ಮಂಡಲ ಅಧ್ಯಕ್ಷ ವಿಶ್ವನಾಥ್, ಯುವ ಮೋರ್ಚಾ ಅಧ್ಯಕ್ಷ ಚಂದು, ಮುಖಂಡರಾದ ಪಿ.ಟಿ. ಕೇಶವೇಗೌಡ, ಸೂರ್ಯ, ಲೋಕೇಶ್, ಮಹೇಶ್, ಖಚಿಡೇಶ್ವರ್ ಹಾಗೂ ಪಕ್ಷದ ಪದಾಧಿಕಾರಿಗಳಿದ್ದರು.
0 Comments