ಮನುಷ್ಯರಂತೆಯೇ ಇನ್ಮುಂದೆ ಪ್ರಾಣಿಗಳಿಗೂ ಸಿಗಲಿದೆ ಚಿಕಿತ್ಸೆ: ಕೆ. ಗೋಪಾಲಯ್ಯ

ಅರಕಲಗೂಡು: ಪಟ್ಟಣದ ಮಲ್ಲಿಪಟ್ಟಣ ರಸ್ತೆಯಲ್ಲಿ  2.4 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಪಶು ವೈದ್ಯಕೀಯ ಪಾಲಿ ಕ್ಲಿನಿಕ್ ಕಟ್ಟಡದ ಉದ್ಘಾಟನೆಯನ್ನು  ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ನೆರವೇರಿಸಿದರು.

ನಂತರ ಮಾತನಾಡಿ, ಪಶು ವೈದ್ಯರು ಮತ್ತು ಸಿಬ್ಬಂಧಿ ಕೊರತೆ ನೀಗಲು ಸರ್ಕಾರ  ಅಗತ್ಯ ಕ್ರಮ ಕೈಗೊಂಡಿದೆ.  ಜಾನುವಾರುಗಳಿಗೆ ತುರ್ತು ಸಂದರ್ಭಗಳಲ್ಲಿ  ಚಿಕಿತ್ಸೆ ದೊರೆಯಲು ಅನುಕೂಲವಾಗುವಂತೆ ಮೋಬೈಲ್ ಚಿಕಿತ್ಸಾ ವಾಹನ ಹಾಗೂ ಜಾನುವಾರುಗಳನ್ನು ಆಸ್ಪತ್ರೆಗೆ ಕರೆತರಲು ನೆರವಾಗುವಂತೆ ಆಂಬುಲೆನ್ಸ್  ವಾಹನವನ್ನು ಒದಗಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

Post a Comment

0 Comments