ಜನಮೆಚ್ಚಿದ ಅಧಿಕಾರಿಗೆ ಜನರಿಂದಲೇ ಅದ್ದೂರಿ ಬೀಳ್ಕೊಡುಗೆ ಸಮಾರಂಭ ಇಂದು

ಅರಕಲಗೂಡು: ಉತ್ತಮ ಅಧಿಕಾರ ಚಲಾಯಿಸಿ ಜನಮೆಚ್ಚುಗೆ ಸಂಪಾಧಿಸಿ ಬಡ್ತಿ ಮೇಲೆ ವರ್ಗಾವಣೆ ಹೊಂದಿದ ರಾಮನಾಥಪುರ ಸಿ.‌ ಸ್ವಾಮಿ ಅವರಿಗೆ ಇಂದು ಬೀಳ್ಕೊಡುಗೆ ಸಮಾರಂಭ ಜರುಗಲಿದೆ.

ರಾಮನಾಥಪುರ ಹೋಬಳಿಯಲ್ಲಿ ರಾಜಸ್ವ ನಿರೀಕ್ಷಕರಾಗಿ 5ವರೆ ವರುಷ ಉತ್ತಮವಾಗಿ ಬಡಬಗ್ಗರ ಧೀನ ದಲಿತರ ಎಲ್ಲಾ ಸಮಾಜದವರ ಕೆಲಸ ಕಾರ್ಯಗಳನ್ನು ನಿರ್ವಹಿಸಿ ಹಾಗೂ ಪ್ರವಾಹ ಬಂದಂತ ಸಮಯದಲ್ಲಿ ರಾತ್ರಿಹಗಲೆನ್ನದೇ ಕೆಲಸಮಾಡಿದ ಸಿ.ಸ್ವಾಮಿಯವರ ಭೀಳ್ಕೊಡುಗೆ ಸಮಾರಂಭ ಕುರಿತು ಮಾತನಾಡಿದ ಮಾಜಿ ಗ್ರಾಮಪಂಚಾಯಿತಿ ಸದಸ್ಯರಾದ ಮಧುರನಹ ಳ್ಳಿಯ ಶ್ರೀನಿವಾಸ್ ಮಾತ ನಾಡಿ ನಮ್ಮ ಹೋಬಳಿಯ ಅಚ್ಚು ಮೆಚ್ಚಿನ  ಸಿ.ಸ್ವಾಮಿರವರು ಉಪತಹಶೀಲ್ದಾರ್/ಶಿರೆಸ್ತೇದಾರ್ ಹಾಗಿ ಮುಂಬಡ್ತಿ ಹೊಂದಿದ್ದರ ಮೇರೆಗೆ ನಮ್ಮ ರಾಮನಾಥಪುರ ಹೋಬಳಿಯ ಎಲ್ಲಾ ಗ್ರಾಮಸ್ಥರು ದಿನಾಂಕ13-09-2022 ರ ಮಂಗಳವಾರ  ಬೆಳಿಗ್ಗೆ 10  ಕ್ಕೆ ಕಾವ್ಯಾಂಜಲಿ ಕನ್ವೆನ್ಷನ್  ಹಾಲ್ ನಲ್ಲಿ ಭೀಳ್ಕೊಡುಗೆ ಸಮಾರಂಭ ಹಮ್ಮಿಕೊಂಡಿದ್ದು 

ಈ ಸಮಾರಂಭಕ್ಕೆ ಮಾನ್ಯ ಜಿಲ್ಲಾಧಿಕಾರಿಗಳು ಅಪರ ಜಿಲ್ಲಾಧಿಕಾರಿಗಳು ಉಪವಿಭಾಗಾಧಿಕಾರಿಗಳು ಹಾಗೂ ಜಿಲ್ಲೆಯ ಎಲ್ಲಾ ತಹಶೀಲ್ದಾರರು ಹಾಗೂ  ತಾಲ್ಲೋಕ್ಕೀನ ಎ ಲ್ಲಾ ಇಲಾಖೆಯ ಅಧಿಕಾರಿಗಳು ಭಾಗವಹಿಸುತಿದ್ದು ಎಲ್ಲಾ ಜನತೆ ಸಾವಿರಾರು ಸಂಖ್ಯೆ ಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಕೋರಿದರು ಈ ಸಂಧರ್ಭದಲ್ಲಿ ಜಿಟ್ಟೇನಹಳ್ಳಿ ಗ್ರಾಮದ ಸತೀಶ್ .ರಾಜೇಶ್ ಸುಭೇದಾರ್ ಕೊಪ್ಪಲು ಮಾಜಿ ಗ್ರಾಮಪಂಚಾಯಿತಿ ಸಧಸ್ಯರಾದ ಮಹದೇವು ಬಸವನಹಳ್ಳಿ ಗ್ರಾಮದ ರವಿ ಹಾಗೂ ಇತರರು ಹಾಜರಿದ್ದರು

Post a Comment

0 Comments